Saturday, 28 July 2012

ಇಂದು ವಿಶ್ವ ಹ್ಯಾಪಟೈಟಿಸ್‌ ದಿನ

ಮಾನವ ಸಂಕುಲಕ್ಕೆ ಕಾಡುತ್ತಿರುವ ಮಹಾ ರೋಗಗಳಲ್ಲಿ 'ಹ್ಯಾಪಟೈಟಸ್‌ ಬಿ' ಮತ್ತು 'ಹ್ಯಾಪಿಟೈಟಸ್‌ ಸಿ' ಕೂಡ ಪ್ರಮುಖವಾದವುಗಳು. ಜಗತ್ತಿನ ಜನರನ್ನು ಕಾಡಿದ ಈ ಮಾರಕ ರೋಗದ ಕುರಿತು ಜಾಗತಿಕ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಸಂಸ್ಥೆ ಹ್ಯಾಪಿಟೈಟಸ್‌ ದಿನವನ್ನು ಘೋಷಿಸಿದೆ. ಅಂತರಾಷ್ಟ್ರೀಯ ಹ್ಯಾಪಿಟೈಟಸ್‌ ದಿನವಾದ ಇಂದು ವಿಶ್ವದಾದ್ಯಂತ ಹ್ಯಾಪಿಟೈಟಸ್‌ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ.  

ಜಗತ್ತಿನಲ್ಲಿ ಸರಿಸುಮಾರು 500 ಮಿಲಿಯನ್‌ ಜನ್ರು ಹ್ಯಾಪಿಟೈಟಸ್‌ ಬಿ ಮತ್ತು ಹ್ಯಾಪಿಟೈಟಸ್‌ ಸಿ ರೋಗದಿಂದ ಬಳಲುತ್ತಿದ್ದಾರೆ.. ಇದೇ ರೋಗಗಳ ಕಾರಣದಿಂದ ಒಂದು ಮಿಲಿಯನ್‌ಗೂ ಹೆಚ್ಚು ಜನರು ಸಾವಿಗೀಡಾಗುತ್ತಿದ್ದಾರೆ. ಇಂತಹ ಮಾರಕ ರೋಗಗಳಿಂದ ಜಗತ್ತನ್ನು ಕಾಪಾಡುವ ದೃಷ್ಠಿಯಿಂದ ವಿಶ್ವಸಂಸ್ಥೆ ಜುಲೈ 28ನ್ನು ವಿಶ್ವ ಹ್ಯಾಪಿಟೈಟಸ್‌ ದಿನವನ್ನಾಗಿ ಘೋಷಿಸಿತು.

2004
ರಲ್ಲಿ ಯೂರೋಪಿಯನ್ ರಾಷ್ಟ್ರಗಳು ಮತ್ತು ಮಧ್ಯ ಪೂರ್ವ ದೇಶಗಳ ಹ್ಯಾಪಿಟೈಟಸ್‌ ಬಾಧಿತರ ಗುಂಫು, ಈ ಮಾರಕ ರೋಗದ ಕುರಿತು ಜಾಗೃತಿ ಮೂಡಿಸುವ ಕೆಲಸ ಪ್ರಾರಂಭಿಸಿತು. 2007ರಲ್ಲಿ ವರ್ಲ್ಡ್ ಹ್ಯಾಪಿಟೈಟಸ್‌ ಅಲಿಯನ್ಸ್‌ ಜಗತ್ತಿನಾದ್ಯಂತ ಹ್ಯಾಪಿಟೈಟಸ್‌ ಬಿ ಮತ್ತು ಸಿ ರೋಗದಿಂದ ಬಳಲುತ್ತಿರುವ ರೋಗಿಗಳ ಸರ್ವೆ ಮಾಡಿ, ಜಾಗೃತಿ ಕಾರ್ಯಕ್ರಮ ಕೈಗೊಂಡ್ತು. ನಂತರ ವಿಶ್ವ ಸಂಸ್ಥೆ ಈ ರೋಗವನ್ನು ಗಂಭೀರವಾಗಿ ಪರಿಗಣಿಸಿ, ಜಗತ್ತಿಗೆ ಜಾಗೃತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡ್ತು.. 2008ರ ಜುಲೈ 28ರಂದು ಮೊದಲ ವಿಶ್ವ ಹ್ಯಾಪಿಟೈಟಸ್‌ ದಿನವನ್ನು ಆಚರಿಸಲಾಯ್ತು.

ಯಕೃತ್ತಿನ ಸೋಂಕು ಮತ್ತು ಉರಿಯೂತ ಹ್ಯಾಪಿಟೈಟಸ್‌ ಬಿ ರೋಗದ ಲಕ್ಷಣ.. ಯಕೃತ್ತು ಸಂಬಂಧಿ ರೋಗವಾದ್ದರಿಂದ ತೀವ್ರ ವಾಂತಿ ಬೇಧಿ ಕಾಣಿಸಿಕೊಂಡು ರೋಗಿಯ ಪ್ರಾಣಕ್ಕೇ ಕುತ್ತು ತರುವ ಅಪಾಯಕಾರಿ ವೈರಸ್‌ ಇದು.. ಜಾಗತಿಕ ಅಪಾಯ ತಂದೊಡ್ಡಿರುವ ಹ್ಯಾಪಿಟೈಟಸ್‌ ಎ,ಬಿ, ಸಿ ಮತ್ತು ಡಿ ಸೋಂಕಿನ ನಿವಾರಣೆಗಾಗಿ ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಜಾಗೃತಿ ಮೂಡಿಸುತ್ತಿದೆ.. ಸದಸ್ಯರಾಷ್ಟ್ರಗಳಿಗೆ ಈ ರೋಗದ ಅಪಾಯದ ಕುರಿತು, ಮುಂಜಾಗೃತೆ ಮತ್ತು ನಿವಾರಣೆಯ ಕುರಿತು ಮಾಹಿತಿ ಬಿತ್ತುವ ಕೆಲಸ ಮಾಡುತ್ತಿದೆ.  ಹ್ಯಾಪಿಟೈಟಸ್‌ ಸೋಂಕು ಮುಕ್ತ ಜಗತ್ತಿನ ನಿರ್ಮಾಣಕ್ಕಾಗಿ ವಿಶ್ವ ಸಂಸ್ಥೆ ಪಣ ತೊಟ್ಟಿದೆ...

Friday, 27 July 2012

ವರವ ಕರುಣಿಸು ತಾಯಿ... ವರ ಮಹಾಲಕ್ಷ್ಮಿ


ಶುಭ ಶ್ರಾವಣ ಮಾಸದ ಎರಡನೇ ಶುಕ್ರವಾರವಾದ ಇಂದು ವರ ಮಹಾಲಕ್ಷ್ಮಿ ಹಬ್ಬ..ದಕ್ಷಿಣ ಭಾರತದ ಪ್ರಮುಖವಾದ ಹಬ್ಬಗಳಲ್ಲಿ ವರ ಮಹಾಲಕ್ಷ್ಮಿ ಹಬ್ಬವೂ ಒಂದು. ಸಕಲ ಐಶ್ವರ್ಯವನ್ನೂ ಕರುಣಿಸುವ ಮಹಾಲಕ್ಷ್ಮಿಗೆ ಮನೆಮನೆಯಲ್ಲಿ ಸಂಭ್ರಮದ ಪೂಜೆ ನಡೆಯುತ್ತೆ. ಎಲ್ಲೆಲ್ಲೂ ಸುಖ, ಸಂಪತ್ತು, ಸಮೃದ್ಧಿಯನ್ನು ಕರುಣಿಸೋ ಭಾಗ್ಯದಾತೆಯ ಆರಾಧನೆ ನಡೆಯುತ್ತೆ.. ಶ್ರೀ ಮಹಾವಿಷ್ಣುವಿನ ಪತ್ನಿ ವರ ಮಹಾಲಕ್ಷ್ಮಿಯನ್ನು ಪೂಜಿಸಿದ್ರೆ, ಸಕಲ ಸೌಭಾಗ್ಯವೂ ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. 

ತಳಿರು ತೋರಣಗಳಿಂದ ಶೃಂಗಾರಗೊಂಡ ಮನೆಗಳಲ್ಲಿ ಭಕ್ತಿಭಾವದಿಂದ ಮಹಾಲಕ್ಷ್ಮಿಯನ್ನು ಸ್ವಾಗತಿಸಲಾಗುತ್ತಿದೆ.  ಸುಂದರ ಮಂಟಪ ಸಿದ್ಧಪಡಿಸಿ, ಲಕ್ಷ್ಮಿ ಮೂರ್ತಿಯನ್ನು ಕುಳ್ಳರಿಸಿ, ಒಪ್ಪಾದ ಸೀರೆಯುಡಿಸಿ, ಹೂವು ಆಭರಣಗಳಿಂದ ದೇವಿಯನ್ನು ಶೃಂಗರಿಸಿ.. ಮಹಾಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಲಾಗುತ್ತೆ. ಸುಮಂಗಲಿಯರಿಗೆ ಅರಶಿನ ಕುಂಕುಮ ನೀಡಿ ಮಹಾಲಕ್ಷ್ಮಿಯನ್ನು ಆರಾಧಿಸಲಾಗುತ್ತೆ.. ವಿವಿಧ ಸಿಹಿ ತಿಂಡಿಗಳನ್ನು ತಯಾರಿಸಿ ವರ ಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮಿಸಲಾಗುತ್ತೆ... ಭಕ್ತಿ ಭಾವದ ವರಲಕ್ಷ್ಮಿ ಹಬ್ಬ ಮನೆ ಮನಗಳಲ್ಲಿ ಹರ್ಷ ತುಂಬುತ್ತದೆ..

ದೀರ್ಘ ಮಾಂಗಲ್ಯ ಭಾಗ್ಯವನ್ನು ಮತ್ತು ಕುಟುಂಬಕ್ಕಾಗಿ ಸುಖ, ಸಮೃದ್ಧಿ, ಸಂಪತ್ತನ್ನು, ಕೋರುವ ಸುಮಂಗಲೆಯರು, ಪುರೋಹಿತರ ಅಗತ್ಯವಿಲ್ಲದೆ ಮಾಡಬಹುದಾದ ವ್ರತವಿದು.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಪತ್ತಿನ ಅಧಿಪತಿಯಾದ ಶುಕ್ರ ಗ್ರಹದ ವಾರದಲ್ಲಿಯೇ ಈ ವ್ರತಾಚರಣೆ ನಡೆಯುವುದರಿಂದ ಈ ವೃತ ಅತ್ಯಂತ ಶ್ರೇಷ್ಠವಂತೆ.

ಸಾಮಾನ್ಯವಾಗಿ ನಗರ ಜನತೆ ಮಾತ್ರ ಆಚರಿಸಿ ಸಂಭ್ರಮಿಸುವ ಹಬ್ಬ ವರಮಹಾಲಕ್ಷ್ಮಿ ಹಬ್ಬ.
ಈ ಹಬ್ಬಕ್ಕೆ ಜಾತಿ ಬೇಧವಿಲ್ಲ.. ಸಮೃದ್ಧಿ, ಸೌಖ್ಯವನ್ನು ಬಯಸಿ ಎಲ್ಲರೂ ಈ ವೃತವನ್ನು ಮಾಡಬಹುದು..  ದಕ್ಷಿಣ ಭಾರತದ ರಾಜ್ಯಗಳಲ್ಲಿ ಆಚರಿಸಿಲ್ಪಡುವ ಪ್ರಮುಖ ಹಬ್ಬಗಳಲ್ಲಿ ವರ ಮಹಾಲಕ್ಷ್ಮಿ ಹಬ್ಬವೂ ಒಂದು..ಈ ವೃತ  ಇತ್ತೀಚಿನ ದಿನಗಳಲ್ಲಿ ಸಾರ್ವತ್ರಿಕ ಆಚರಣೆಯಾಗಿ ಬದಲಾಗುತ್ತಿರುವುದೂ ಕೂಡ ಒಂದು ಒಳ್ಳೆಯ ಬೆಳವಣಿಗೆ ಅನ್ನೋದು ಹಲವರ ಅಭಿಪ್ರಾಯ. 


ಭಾಗ್ಯದಾತೆ ವರಮಹಾಲಕ್ಷ್ಮಿಯ ಕೃಪೆಯಿಂದ ಎಲ್ಲೆಡೆಯೂ ಸಂಪತ್ತು ನೆಲೆಸಲಿ ಅನ್ನೋದು ಎಲ್ಲರ ಹಾರೈಕೆ.. ಎಲ್ಲರಿಗೂ ವರ ಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...