Tuesday, 14 August 2012

ಇಂದು ಭಾರತ ವಿಭಜನೆಯಾದ ದಿನ


ಇವತ್ತು ಅಂದ್ರೆ ಆಗಷ್ಟ್‌ 14, ಅಖಂಡ ಭಾರತ ವಿಭಜನೆಯಾದ ದಿನ.. ಸ್ವಾತಂತ್ರ್ಯ ಪಡೆದುಕೊಳ್ಳುವುದರ ಜೊತೆಗೆ ಭಾರತದೇಶದ ವಿಭನೆಯೂ ಆಗಿಹೋಯ್ತು.  ನಮ್ಮ ದೇಶದ ಪಂಜಾಬ್‌ ಮತ್ತು ಬಂಗಾಳ ಪ್ರಾಂತ್ಯಗಳು ವಿಭಜನೆಗೊಂಡು ಪಾಕಿಸ್ತಾನ ರಾಷ್ಟ್ರ ನಿರ್ಮಾಣವಾದ ದಿನ ಇವತ್ತು..


ಭಾರತ ದೇಶವನ್ನು ಸುಮಾರು 200 ವರ್ಷಗಳ ಕಾಲ ಆಳಿದ ಆಂಗ್ಲರ ದಾಸ್ಯದಿಂದ ಮುಕ್ತಿ ಪಡೆಯಲು ಅಸಂಖ್ಯ ಹೋರಾಟಗಾರರು ಪ್ರಯತ್ನ ಪಟ್ಟರು. ತಮ್ಮ ಕನಸಿನ ದೇಶದ ನಿರ್ಮಾಣಕ್ಕಾಗಿ ಅವಿರತ ಶ್ರಮಿಸಿದ್ರು.. ಇದರ ಫಲವಾಗಿ ಭಾರತ ದೇಶಕ್ಕೆ ಬ್ರಿಟೀಷರು ಸ್ವಾತಂತ್ರ್ಯ ಕೊಟ್ಟರು.. ಆದ್ರೆ ಭಾರತದ ಸ್ವಾಂತಂತ್ರ್ಯಕ್ಕೂ ಮುಂಚೆಯೇ ದೇಶ ವಿಭಜನೆಯ ಮಾತುಗಳು ಕೇಳಿ ಬರ್ತಾ ಇದ್ವು..ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಅಸಮಾಧಾನಗೊಂಡ ಮುಸ್ಲಿಮ್‌ ಪ್ರತ್ಯೇಕವಾದಿಗಳು ತಮಗೆ ಪ್ರತ್ಯೇಕ ರಾಷ್ಟ್ರ ಬೇಕು ಎಂಬ ಕೋರಿಕೆ ಇಟ್ಟರು..


ಅಖಿಲ ಭಾರತ ಮುಸ್ಲಿಂ ಲೀಗ್‌ನ ಪ್ರಮುಖರಾದ ಇಕ್ಬಾಲ್, ಮೊಹಮ್ಮದ್ ಅಲಿ ಜಿನ್ನಾ, ಮತ್ತಿತರು ಪ್ರತ್ಯೇಕ ರಾಷ್ಟ್ರಕ್ಕಾಗಿ ದನಿ ಎತ್ತಿದರು.. ಮೊದಲಿಗೆ ಭಾರತದ ಜಾತ್ಯಾತೀತವಾದಿಗಳಿಂದ ಮುಸ್ಲೀಂರ ಈ ಕೋರಿಕೆಗೆ ವಿರೋಧ ವ್ಯಕ್ತವಾಯಿತಾದರೂ..ಪ್ರತ್ಯೇಕತಾವಾದಿಗಳ ಒತ್ತಾಯಕ್ಕೆ ಮಣಿದು ದೇಶದ ವಿಭಜನೆ ಮಾಡಲಾಯ್ತು. ನಮ್ಮ ಭಾರತದ ಪಂಜಾಬ್‌ ಮತ್ತು ಬಂಗಾಳ ಪ್ರಾಂತ್ಯಗಳು ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನ ರಾಷ್ಟ್ರಗಳಾದ್ವು..


ದೇಶ ವಿಭಜನೆಯ ನಂತರ, ಭಾರತದಿಂದ ಮುಸ್ಲೀಂರು ಪಾಕಿಸ್ತಾನಕ್ಕೆ ಒಲಸೆ ಹೋದ್ರೆ.., ವಿಭಾಗವಾಗಿ ಹೋದ ಪಂಜಾಬ್‌ ಪ್ರಾಂತ್ಯದಿಂದ ಹಿಂದೂ ಹಾಗೂ ಸಿಕ್‌ರು ಭಾರತಕ್ಕೆ ಹೊರಟು ನಿಂತ್ರು. ಒಂದು ಕೋಟಿಗೂ ಹೆಚ್ಚು ಜನರು ತಮ್ಮ ಧರ್ಮದ ಬಹುಸಂಖ್ಯಾತರು ಇರುವ ದೇಶವನ್ನು ಆಯ್ಕೆ ಮಾಡಿಕೊಂಡು ತಮ್ಮ ಭೂಮಿ, ಮನೆ, ಪರಿಸರವನ್ನು ತೊರೆದ್ರು.. ಇದೇ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದ ಮತೀಯ ಗಲಭೆ ರಕ್ತಪಾತವನ್ನೇ ಹರಿಸಿತ್ತು. ಭಾರತ ಹಾಗೂ ಪಾಕಿಸ್ತಾನ ಎರಡೂ ಕಡೆಯೂ ರಕ್ತಪಾತ ಉಲ್ಬಣಗೊಂಡಿತ್ತು.. ಒಂದು ಅಂದಾಜಿನ ಪ್ರಕಾರ ಒಂದು ಲಕ್ಷಕ್ಕೂ ಹೆಚ್ಚು ಜನರು ಗಲಭೆಗೆ ಬಲಿಯಾಗಿಹೋದ್ರು. ಆಂಗ್ಲರ ದಾಸ್ಯದಿಂದ ಬಿಡುಗಡೆಗೊಂಡು, ಸ್ವಾತಂತ್ರ್ಯ ಪಡೆದ ಖುಷಿಯನ್ನೇ ಮರೆಮಾಚಿಸುವಂತಹ ಘಟನೆ ದೇಶದಲ್ಲಿ ನಡೆದುಹೋಗಿತ್ತು..  ಮೌಂಟ್‌ಬ್ಯಾಟನ್ ಯೋಜನೆಯಡಿ ಭಾರತ ವಿಭಜನೆ ನಡೆಯಿತು. ಬ್ರಿಟಿಷ್ ಸರಕಾರ ನಿಯೋಜಿಸಿದ 'ಸಿರಿಲ್ ರಾಡ್‌ಕ್ಲಿಫ್'  ನೇತೃತ್ವದಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿ ನಿರ್ಮಾಣವಾಯ್ತು.


ಸ್ವಾತಂತ್ರ್ಯ ಪಡೆದ ಹರ್ಷದ ದಿನವನ್ನು ಭಾರತ ಆಗಷ್ಟ್‌ 15ರಂದು ಆಚರಿಸಿದ್ರೆ, ಪಾಕಿಸ್ತಾನ ರಾಷ್ಟ್ರದಲ್ಲಿ, ಭಾರತದಿಂದ ಪಾಕಿಸ್ತಾನ ವಿಭಜನೆಗೊಂಡ ದಿನವಾದ ಆಗಷ್ಟ್‌‌ 14ರಂದು ಸ್ವಾಂತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ.







Sunday, 12 August 2012

ಅಂತರಾಷ್ಟ್ರೀಯ ಯುವ ದಿನ


ಇವತ್ತು ಅಂತರಾಷ್ಟ್ರೀಯ ಯುವ ದಿನ.. ಉತ್ಸಾಹದ ಬುಗ್ಗೆಯಂತಿರುವ ಯುವ ಮನಸ್ಸುಳು.... ಯಾವುದನ್ನೇ ಆದ್ರೂ ಸಾಧಿಸಿ ತೋರಿಸುವ ಛಲ ಹೊತ್ತಿರುವ ಯವ ಸಮೂಹ..., ಹೊಸ ಹೊಸ ಸವಾಲುಗಳನ್ನು ಜಯಿಸುವ ಆತ್ಮವಿಶ್ವಾಸದಲ್ಲಿರುವ ಯುವ ಜನತೆಯಿಂದ ಎಲ್ಲಾ ದೇಶಗಳ ಅಭಿವೃದ್ಧಿ ಸಾಧ್ಯ..  ಪ್ರತಿಯೊಂದು ದೇಶಕ್ಕೂ ಶಕ್ತಿ ಮತ್ತು ಉಜ್ವಲ ಭವಿಷ್ಯ ನೀಡಲು ಆ ದೇಶದ ಯುವ ಜನತೆಯಿಂದಷ್ಟೇ ಸಾಧ್ಯ. ಅಭಿವೃದ್ಧಿಯತ್ತ ಸಾಗುತ್ತಿರುವ ಯುವ ಪ್ರಜೆಗಳಿಂದ ಮಾತ್ರ ದೇಶ ತನ್ನ ಔನತ್ಯದ ಕನಸು ಕಾಣಲು ಸಾಧ್ಯ..ಇಂತಹ ಯುವ ಸಮೂಹಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿಶ್ವ ಸಂಸ್ಥೆ ಅಂತರಾಷ್ಟ್ರೀಯ ಯುವ ದಿನವನ್ನು ಘೋಷಿಸಿದೆ.. 

ಯೂತ್‌ ಅನ್ನೋ ಪದವೇ ಉತ್ಸಾಹಕ್ಕೆ ಸರಿಸಮಾನವಾಗಿದೆ.. ಹರ್ಷ, ಛಲ, ಶಕ್ತಿಯನ್ನು ಸಂಕೇತಿಸುವ ಪದ ಇದು. ಎಲ್ಲಾ ರಾಷ್ಟ್ರಗಳ ಭವ್ಯ ಭವಿಷ್ಯ ನಿರ್ಧಾರವಾಗುವುದು ಕೂಡ ಆಯಾ ದೇಶಗಳ ಯುವ
ಜನಾಂಗದ ಮೇಲೆಯೇ... ಇದೇ ಕಾರಣಕ್ಕೇ ಯುವ ಜನಾಂಗವನ್ನು ಯುವ ಶಕ್ತಿ ಎಂದು
ಕರೆಯಲಾಗುತ್ತೆ...

ಪ್ರತಿ ದೇಶದ ಭವಿತವ್ಯದ ಕನಸುಗಳಾಗಿರುವ ಯುವ ಸಮೂಹಕ್ಕೆ ಅಭಿವೃದ್ದಿಯ ಜಾಗೃತೆ ಮೂಡಿಸುವ ನಿರ್ಧಾರ ತೆಗೆದುಕೊಂಡ್ತು ವಿಶ್ವ ಸಂಸ್ಥೆ. 1999ರ ಡಿಸೆಂಬರ್‌ 17ರಂದು ಯುವಕರಿಗಾಗಿಯೇ ಒಂದು ದಿನವನ್ನು ಮೀಸಲಿಡವುದಾಗಿ ತನ್ನ ಸದಸ್ಯ ರಾಷ್ಟ್ರಗಳಿಗೆ ಸೂಚಿಸಿತ್ತು. ವಿಶ್ವ ಸಂಸ್ಥೆಯ ಘೋಷಣೆಯ ಪ್ರಕಾರ, 2000 ಇಸವಿಯಿಂದ ಪ್ರತಿ ವರ್ಷದ ಆಗಷ್ಟ್‌‌ 12ರಂದು 'ವಿಶ್ವ ಯುವ ದಿನ'ವನ್ನು ಆಚರಿಸಲಾಗುತ್ತಿದೆ.

ನಿರುದ್ಯೋಗ, ಅಸಮರ್ಪಕ ಮಾಹಿತಿಯ ಸಂಗ್ರಹ, ನೈಪುಣ್ಯತೆಯ ಕೊರತೆ, ಸಮರ್ಪಕ ನಿರ್ಧಾರದ ಕೊರತೆ, ಮುಂತಾದ ಸಮಸ್ಯೆಯಿಂದ ಬಳಲುತ್ತಿರುವ ಅನೇಕ ದೇಶಗಳ ಯುವ ಜನತೆಯಲ್ಲಿ ಜಾಗೃತಿಯ ಬೀಜ ಬಿತ್ತುವ ಕಾರ್ಯವನ್ನು ವಿಶ್ವ ಸಂಸ್ಥೆ ಮಾಡುತ್ತಿದೆ.. ಯುವ ಜನತೆ ಅನುಭವಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು ಮತ್ತು ಸರ್ಕಾರದಿಂದ ಯುವ ಸಮೂಹಕ್ಕೆ ಸಿಗಲೇ ಬೇಕಾದ ಸವಲತ್ತುಗಳ ಬಗ್ಗೆ ಬೇಡಿಕೆ ಸಲ್ಲಿಸುವ ಕಾರ್ಯವನ್ನು ವಿಶ್ವ ಸಂಸ್ಥೆ ಕೈಗೊಂಡಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ, ಲೇಖನಗಳ ಮೂಲಕ, ಚರ್ಚೆಗಳ ಮೂಲಕ ಯುವಕರಲ್ಲಿ ಸಾಧನೆಯ ಬೀಜವನ್ನು ಬಿತ್ತುವ ಕಾರ್ಯವನ್ನು ಸದಸ್ಯ ರಾಷ್ಟ್ರಗಳಲ್ಲಿ ಕೈಗೊಳ್ಳಲಾಗುತ್ತೆ.


'
ಯುವ ಶಕ್ತಿಯಿಂದಲೇ ಯಶಸ್ವಿ ಜಗತ್ತಿನ ನಿರ್ಮಾಣ ಸಾಧ್ಯ' ಅನ್ನೋದು ಈ ವರ್ಷದ 'ವಿಶ್ವ ಯುವ
ದಿನದ ಸಂದೇಶ. ಯುವ ಜನಾಂಗದ ಏಳಿಗೆಯೇ ಪ್ರತೀ ದೇಶದ ಏಳಿಗೆ. ಯುವ ಶಕ್ತಿ ಜಾಗೃತವಾದಾಗ ಮಾತ್ರ ಜಡ ಜಗತ್ತು ಬದಲಾಗಲು ಸಾಧ್ಯ.. ಶಕ್ತಿಯನ್ನು ಪ್ರತಿನಿಧಿಸುವ ಯುವ ಸಮೂಹ ಸಾಧನೆಯತ್ತ ಸಾಗಲಿ ಅನ್ನೋದು ಎಲ್ಲರ ಹಾರೈಕೆ.. ಎಲ್ಲರಿಗೂ ವಿಶ್ವ ಯುವ ದಿನದ ಶುಭಾಶಯಗಳು..


Saturday, 4 August 2012

'ವಿಶ್ವ ಸ್ನೇಹಿತರ ದಿನ'


ಯುವ ಮನಸ್ಸುಗಳಿಗೆ ಇಂದು ಹಬ್ಬ. ಸುಮಧುರ ಸಂಬಂಧವಾದ 'ಸ್ನೇಹ'ಕ್ಕೆ ಗೌರವ ನೀಡುವ ದಿನ ಇವತ್ತು. ಜೀವನದಲ್ಲಿ ಅತೀ ಮುಖ್ಯ ಪಾತ್ರವಹಿಸೋ ಗೆಳೆಯರನ್ನು ನೆನಪಿಸಿಕೊಂಡು, ಪರಸ್ಪರ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡು.. ಗೆಳೆತನದ ಆನಂದವನ್ನು ಅನುಭವಿಸುವ ದಿನವೇ 'ವಿಶ್ವ ಗೆಳೆಯರ ದಿನ'...




ಮನಸ್ಸು ಮನಸ್ಸುಗಳ ಬಾಂಧವ್ಯವೇ ಗೆಳೆತನ. ನಮ್ಮ ನಗುವಿಗೆ, ಕಣ್ಣೀರಿಗೆ ಸಾಥಿಯಾಗಿ ನಮ್ಮೊಂದಿಗೆ ಬೆರೆಯುವ ಆ ಮತ್ತೊಂದು ಮನಸ್ಸೇ ಸ್ನೇಹದ ರೂಪ. ಆ ಮನಸ್ಸಿನಿಂದ ಸಿಗುವ ಕಾಳಜಿ, ಆತ್ಮೀಯತೆ ಮತ್ತು ಸಂತೋಷವೇ ಗೆಳೆತನದ ಅಹ್ಲಾದಕ್ಕೆ ಸಾಕ್ಷಿ.. ಇಂತಹ ಗೆಳೆತನಕ್ಕೆ ಗೌರವ ಸಲ್ಲಿಸುವದಕ್ಕೋಸ್ಕರ ಆಗಷ್ಟ್‌ ತಿಂಗಳ ಮೊದಲ ಭಾನುವಾರವನ್ನು ಫ್ರೆಂಡ್‌ಶಿಪ್‌‌ ಡೇ ಆಗಿ ಆಚರಿಸಲಾಗುತ್ತಿದೆ.

ಉತ್ತರ ಅಮೇರಿಕಾದ ರಾಷ್ಟ್ರಗಳು 1919 ರಿಂದಲೇ ಸ್ನೇಹಿತರ ದಿನವನ್ನು ಆಚರಿಸುತ್ತಾ ಬಂದಿವೆ.. 1958ರಲ್ಲಿ ವಿಶ್ವ ಸಂಸ್ಥೆ ವಿಶ್ವಕ್ಕೆ ಸ್ನೇಹಿತರ ದಿನ ಪರಿಚಯ ಮಾಡ್ತು. ಜುಲೈ 30ರ ದಿನವನ್ನು ವಿಶ್ವ ಸ್ನೇಹಿತರ ದಿನವನ್ನಾಗಿ ಘೋಷಿಸಿತು..ನಂತರ ದಕ್ಷಿಣ ಏಷ್ಯಾದ ರಾಷ್ಟ್ರಗಳು ಈ ದಿನದ ಆಚರಣೆಯನ್ನು ಸ್ವೀಕರಿಸಿದ್ವು.. ಆದ್ರೆ, ಅರ್ಜಂಟೈನಾ ಮತ್ತು ಬ್ರೆಸಿಲ್‌ಗಳಲ್ಲಿ ಜುಲೈ 20ಕ್ಕೆ ಸ್ನೇಹಿತರ ದಿನವನ್ನು ಆಚರಿಸಲಾಗುತ್ತೆ.. ಹಾಗೇ ಉರುಗ್ವೆ ಸೇರಿದಂತೆ ಕೆಲವು ದೇಶಗಳಲ್ಲಿ ಜುಲೈ 30ರಂದು ಆಚರಿಸ್ತಾರೆ. ಭಾರತ ಸೇರಿದಂತೆ ಇನ್ನೂ ಹಲವು ರಾಷ್ಟ್ರಗಳಲ್ಲಿ ಸ್ನೇಹಿತರ ದಿನವನ್ನು ಆಗಷ್ಟ್‌ ತಿಂಗಳ ಮೊದಲ ಭಾನುವಾರ ಆಚರಿಸಲಾಗುತ್ತದೆ...

ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಉಡುಗೊರೆ ನೀಡಿ.. ಪರಸ್ಪರ ಸ್ನೇಹಿತರೆಲ್ಲ ಸಂತಸಪುಡವ ದಿನ ಇವತ್ತು. ಗೆಳೆತನದ ಖುಷಿಯನ್ನು ಸವಿಯುವ ಯುವ ಮನಸ್ಸುಗಳಿಗೆ ಈ ಫ್ರೆಂಡ್‌ಶಿಪ್‌ ಡೇ ಅಂದ್ರೆ, ಅದೇನೋ ಉತ್ಸಾಹ.. ನಮ್ಮ ದೇಶದಲ್ಲಿ ಫ್ರೆಂಡ್‌ಶಿಪ್‌ ಬ್ಯಾಂಡ್‌ನ್ನು ಗೆಳೆಯರ ಕೈಗೆ ಕಟ್ಟಿ ಸಂತಸ ಪಡುವ ಸಂಸ್ಕೃತಿ ಇದೆ..

ಪುಟ್ಟ ಮಗುವಿಗೆ ಪ್ರಪಂಚದ ಅರಿವು ಮೂಡುತ್ತಿದ್ದಂತೇ ಅದು ಗೆಳೆಯರ ಹುಡುಕಾಟ ಪ್ರಾರಂಭ ಮಾಡುತ್ತೆ.. ತನ್ನ ಭಾವನೆಗಳಿಗೆ, ಯೋಚನೆಗಳಿಗೆ ಸರಿಹೊಂದುವ ಮತ್ತೊಂದು ಮನಸ್ಸಿಗಾಗಿ ಹವಣಿಸುತ್ತೆ.. ಹೀಗೆ ಚಿಕ್ಕಂದಿನಿಂದಲೇ ಗೆಳೆತನದ ಅವಶ್ಯಕತೆ, ಅನಿವಾರ್ಯತೆಯ ಅರಿವಾಗುತ್ತೆ ಅದಕ್ಕೆ..  ಈ ಗೆಳೆತನಕ್ಕೆ ವಯಸ್ಸಿನ ಮಿತಿಯಿಲ್ಲ..ಈ ಸ್ನೇಹ ಅನ್ನೋದು ಸಮಾನ ಮನಸ್ಕರ ನಡುವೆ ಬೆಳೆಯುವಂತಹ ಆತ್ಮೀಯತೆ. ಮಕ್ಕಳಿಂದ ಹಿಡಿದು ವೃದ್ಧರಾದಿಯಾಗಿ ಎಲ್ಲರೂ ತಮ್ಮದೇ ಒಂದು ಸ್ನೇಹ ಪ್ರಪಂಚವನ್ನು ಹೊಂದಿರ್ತಾರೆ.. ಸ್ನೇಹದ ಭಾವದಿಂದ್ಲೇ ಯಾವುದೋ ನೆಮ್ಮದಿ ಪಡೆಯುತ್ತಾರೆ. ಅಂತಹ ಸ್ನೇಹಕ್ಕೊಂದು ಹ್ಯಾಟ್ಸಾಫ್‌ ಹೇಳೋಣ ಅಲ್ವಾ...? ಎಲ್ರಿಗೂ ವಿಶ್ವ ಸ್ನೇಹಿತರ ದಿನದ ಹಾರ್ದಿಕ ಶುಭಾಶಯಗಳು..

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...