ಭಾರತದ ಸ್ವಾತಂತ್ರ್ಯ
ಹೋರಾಟದಲ್ಲಿ ಮಿಂಚಿದ ಮಹಿಳಾ ಹೋರಾಟಗಾರ್ತಿ. ಸ್ವಾತ೦ತ್ರ್ಯ ಸ೦ಗ್ರಾಮದ ಇತಿಹಾಸದಲ್ಲಿ ಧ್ರುವತಾರೆಯಾಗಿಮೆರೆದ
ಮಹಿಳೆ. ಭಾರತೀಯತೆಯನ್ನು ಪ್ರತಿನಿಧಿಸುವ, ರಾಷ್ಟ್ರಧ್ವಜವನ್ನು ಮೊಟ್ಟ ಮೊದಲಬಾರಿಗೆ ಆರೋಹಣ ಮಾಡಿದ ನಾಯಕಿ... ಮೇಡಮ್ ಕಾಮಾ ಹುಟ್ಟಿದ ದಿನ
ಇವತ್ತು..
1861 ರ ಸೆಪ್ಟೆಂಬರ್ 24ರಂದು ಹುಟ್ಟಿದ್ದ ಮೇಡಮ್ ಕಾಮಾರ ಹೆಸರು, ಮುಂಚೆ ಭಿಕಾಜಿ ಪಟೇಲ್
ಎಂದಾಗಿತ್ತು. ಮುಂಬೈನ ಶ್ರೀಮಂತ ಕುಟುಂಬದಲ್ಲಿ
ಹುಟ್ಟಿದ್ದ ಇವರು ಒಳ್ಳೆಯ ಶಿಕ್ಷಣ ಪಡೆದ್ರು. ಬ್ರಿಟೀಷ್ ವಕೀಲರಾದ ರಸ್ಟಾಮ್ ಕಾಮಾರನ್ನು ಪ್ರೀತಿಸಿ ಮದುವೆಯಾದ ಭಿಕಾಜಿ ಪಟೇಲ್, ಭಿಕಾಜಿ ಕಾಮಾ ಆಗಿ ಬದಲಾದ್ರು. ಆದ್ರೆ, ಸಂತಸದ ದಾಂಪತ್ಯ ಜೀವನ ಇವರದಾಗಿರಲಿಲ್ಲ, ಹೀಗಾಗಿ ಸಾಮಾಜ ಸೇವೆಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡ್ರು. 1896ರ ಸಮಯದಲ್ಲಿ ಮುಂಬೈ ನಗರದಲ್ಲಿ ಕ್ಷಾಮ ಮತ್ತು ಪ್ಲೇಗ್ ರೋಗ ಕಾಣಿಸಿಕೊಂಡಾಗ, ಪ್ಲೇಗ್ ಮಾರಿಗೆ ತುತ್ತಾಗಿ ಬಳಲಿದ್ರು. ಅದೃಷ್ಟವಶಾತ್ ಚಿಕಿತ್ಸೆಯಿಂದ ಚೇತರಿಸಿಕೊಂಡ್ರು. ನಂತರ ಪ್ಲೇಗ್ ರೋಗಿಗಳ ಸೇವೆ ಮಾಡಿದ್ರು.
1902ರಲ್ಲಿ ದಾದಾ ಬಾಯಿ ನವರೋಜಿಯವರ ಜೊತೆ, ದೇಶಕ್ಕಾಗಿ ಕೆಲಸ ಮಾಡಿದ್ರು. 1907ರಲ್ಲಿ ಜರ್ಮನಿಯ ಸ್ಟಟ್ಗರ್ಟಿನಲ್ಲಿ ನಡೆದ 12ನೇ ಅಂತಾರಾಷ್ಟ್ರೀಯ ಸಮಾಜವಾದಿ ಅಧಿವೇಶನದಲ್ಲಿ ಕೆಂಪು, ಬಿಳಿ ಮತ್ತು ಹಸಿರು ಪಟ್ಟಿಗಳಿದ್ದ ತ್ರಿವರ್ಣ ರಂಜಿತ ಭಾರತೀಯ ರಾಷ್ಟ್ರಧ್ವಜದ ಮೊದಲ ಮಾದರಿಯನ್ನು ಹಾರಿಸಿ, ವಿಶೇಷ ಕೀರ್ತಿಗೆ ಪಾತ್ರರಾದ್ರು ಮೇಡಮ್ ಕಾಮಾ.
ಈ ಧ್ವಜ ಭಾರತದ ಸ್ವಾತಂತ್ರ್ಯದ ಪ್ರತೀಕ. ಇದು ಭಾರತದ ಸ್ವತ೦ತ್ರಕ್ಕಾಗಿ ಜೀವತ್ಯಜಿಸಿದ ದೇಶಪ್ರೇಮಿಗಳ ನೆತ್ತರಿನಿ೦ದ ಪವಿತ್ರಗೊಳಿಸಲ್ಪಟ್ಟಿದೆ. ಈ ಧ್ವಜದ ಪತಿನಿಧಿಯಾಗಿ ಪ್ರಾರ್ಥಿಸುತ್ತೇನೆ, ಓ ಮಹನೀಯರೇ ಏಳಿ, ಈ ಧ್ವಜಕ್ಕೊ೦ದಿಸಿ. ವಿಶ್ವದೆಲ್ಲ ಸ್ವತ೦ತ್ರ್ಯಾರಾಧಕರೇ ಈ ಧ್ವಜದೊಡನೆ ಸಹಕರಿಸಿ" ಎಂದು ಉದ್ಘರಿಸಿದ ಮೇಡಮ್ ಕಾಮಾರಿಗೆ ಅಲ್ಲಿ ನೆರೆದವರೆಲ್ಲ ಎದ್ದುನಿಂತು ತಮ್ಮ ಸ್ಪಂದನೆಯನ್ನು ಸೂಚಿಸಿದ್ರು.
ನಾವು ಭಾರತಕ್ಕಾಗಿದ್ದೇವೆ, ಭಾರತ ಭಾರತೀಯರಿಗಾಗಿಯೇ ಇದೆ. ಎಂದು ಸಾರುತ್ತ, ಭಾರತೀಯರಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸುತ್ತಿದ್ದ ಮೇಡಮ್ ಕಾಮಾರ ಕಾರ್ಯವನ್ನು ಹತ್ತಿಕ್ಕಲು ಬ್ರಿಟೀಷ್ ಸರ್ಕಾರ ಪ್ರಯತ್ನಿಸುತ್ತಲೇ ಇತ್ತು. ಪ್ಯಾರೀಸ್ನಲ್ಲಿದ್ದ ಕಾಮಾ ಅವರ ಮನೆ, ವಿದೇಶಗಳಲ್ಲಿರುವ ಭಾರತೀಯ ಕ್ರಾಂತಿಕಾರಿಗಳ ಅಡ್ಡವಾಗಿತ್ತು. ರಷಿಯನ್ ಕ್ರಾಂತಿಕಾರಿ ಲೆನಿನ್ ಕೂಡ, ತಮ್ಮ ತೀರ್ವಗಾಮಿ ವಿಚಾರ ವಿನಿಮಯಕ್ಕಾಗಿ ಇಲ್ಲಿಗೆ ಭೇಟಿ ಕೊಡ್ತಾ ಇದ್ರು. 'ವಂದೇ ಮಾತರಂ' ಎಂಬ ಕ್ರಾಂತಿಕಾರಿ ಪತ್ರಿಕೆಯ ಸಂಪಾದಕಿಯಾಗಿಯೂ ಮೇಡಮ್ ಕಾಮಾ ಕೆಲಸ ಮಾಡಿದ್ರು. ಭಾರತದ ಮತ್ತೋರ್ವ ಕ್ರಾಂತಿಕಾರಿ ನಾಯಕ ವೀರ್ ಸಾವರ್ಕರ್ಗೆ ಸಂಪೂರ್ಣ ಬೆಂಬಲ ನೀಡಿದ್ರು. ಇವರ ಈ ಕ್ರಾಂತಿಕಾರಿ ಹೋರಾಟದ ಫಲವಾಗಿ, ಬ್ರಿಟೀಷ್ ಸರ್ಕಾರ ಮೇಡಮ್ ಕಾಮಾರಿಗೆ ಭಾರತಕ್ಕೆ ಮರಳದಂತೆ ತಾಕೀತು ಮಾಡಿತ್ತು.
35 ವರ್ಷಗಳ ಕಾಲ ವಿದೇಶದಿಂದಲೇ ಭಾರತದ ಸ್ವಾತಂತ್ರ್ಯಕ್ಕಾಗಿ ಕಾಯಾ ವಾಚಾ ಮನಸಾ ಹೋರಾಡಿದ ಈ ಹೋರಾಟಗಾರ್ತಿ,1936ರ ಆಗಷ್ಟ್13ರಲ್ಲಿ ಅನಾರೋಗ್ಯದ ಕಾರಣದಿಂದ ವಿಧಿವಶರಾದ್ರು. ವಿದೇಶದಲ್ಲಿದ್ದುಕೊಂಡು ತಾಯ್ನಾಡಿಗಾಗಿ ಹೋರಾಡಿದ ಇವರು, ಜೀವನದ ಕೊನೆಯ ದಿನಗಳಲ್ಲಿ ಭಾರತಕ್ಕೆ ಮರಳಿ, ಭಾರತಮಾತೆಯ ಮಡಿಲಿನಲ್ಲಿಯೇ ಪ್ರಾಣಬಿಟ್ಟರು.