ಇವತ್ತು ಅಂತರಾಷ್ಟ್ರೀಯ ಆಹಾರ ದಿನ. ಕೃಷಿಕರು ಮತ್ತು ಆಹಾರೋತ್ಪಾದಕರ
ಅಭಿವೃದ್ಧಿಗಾಗಿ ವಿಶ್ವ
ಸಂಸ್ಥೆ ಈ ದಿನ ಆಚರಿಸುತ್ತಿದೆ. ವಿಶ್ವ ಸಂಸ್ಥೆಯ
ಅಂಗಸಂಸ್ಥೆಯಾದ 'ವಿಶ್ವ ಆಹಾರ
ಮತ್ತು ಕೃಷಿ ಸಂಸ್ಥೆ' 1945,
ಅಕ್ಟೋಬರ್
16ರಂದು
ಸ್ಥಾಪಿತಗೊಂಡ್ತು. ಇದರ ಸ್ಮರಣಾರ್ಥ ಅಕ್ಟೋಬರ್ 16ನ್ನು ಅಂತರಾಷ್ಟ್ರೀಯ ಆಹಾರ ದಿನವನ್ನಾಗಿ ವಿಶ್ವ ಸಂಸ್ಥೆ
ಘೋಷಿಸಿತು.
1945 ರ ವಿಶ್ವ ಸಂಸ್ಥೆಯ 'ಸಾಮಾನ್ಯ ಸಭೆ'ಯಲ್ಲಿ, ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ಸದಸ್ಯರಾಗಿದ್ದ, ಹಂಗೇರಿಯಾದ ಮಂತ್ರಿ ' ಡಾ.ಪಾಲ್ ರೊಮೇನಿ, ವಿಶ್ವ ಆಹಾರ ದಿನ ಆಚರಿಸೋಕೆ ಸಲಹೆ ನೀಡಿದ್ರು. ಇವರ ಸಲಹೆಯನ್ನು ಸ್ವೀಕರಿಸಿ ವಿಶ್ವ ಸಂಸ್ಥೆ, ಈ ದಿನವನ್ನು ಅಂಗೀಕರಿಸಿತು. ಇದೀಗ ಸುಮಾರು 150 ರಾಷ್ಟ್ರಗಳಲ್ಲಿ ವಿಶ್ವ ಆಹಾರ ದಿನ ಆಚರಿಸ್ತಾರೆ.
ಜಗತ್ತಿನ ಹಲವು ರಾಷ್ಟ್ರಗಳಲ್ಲಿರುವ ಬಡತನ ಮತ್ತು ಹಸಿವಿನ ಕುರಿತು ಜಗತ್ತಿಗೆ ಅರಿವು ಮೂಡಿಸಲಾಗುತ್ತೆ. ಜಗತ್ತಿನ ಜನರಿಗೆ ಆಹಾರ ಪೂರೈಸೋ ರೈತರ ಸಮಸ್ಯೆಗಳ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಅನೇಕ ಕಾರ್ಯಕ್ರಮಗಳು ಈ ದಿನ ಜರುಗುತ್ವೆ. ಸಣ್ಣ ಪ್ರಮಾಣದ ರೈತರಿಗೆ ಸಹಾಯ ಮಾಡಲು ಮೈಕ್ರೋ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತೆ. ಆಹಾರ ಪೂರೈಕೆ ಮತ್ತು ವಿತರಣೆಯ ಸಮಸ್ಯೆಗಳ ಕುರಿತು, ವಿಶ್ವ ಸಂಸ್ಥೆಯ ಆಶ್ರಯದಲ್ಲಿ, ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ವಿಚಾರಗೋಷ್ಟಿ, ಸಮ್ಮೇಳನಗಳು, ಕಾರ್ಯಾಗಾರಗಳನ್ನು ನಡೆಸಲಾಗುತ್ತೆ.
ಭಾರತದಂತಹ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕತೆಯ ಬೆನ್ನೆಲುಬಾಗಿದೆ ಕೃಷಿ. ಹೀಗಾಗಿ ಆರೋಗ್ಯ ಪೂರ್ಣ ಆಹಾರದ ಪೂರೈಕೆ ಮತ್ತು ಉತ್ಪಾದನೆಯ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತೆ, ಹಾಗೇ.. ಎಲ್ಲ ದೇಶಗಳೂ, ತಮ್ಮ ಕೃಷಿ ಕ್ಷೇತ್ರದ ಅಭಿವೃದ್ಧಿಗೆ, ಹಾಗೂ ರೈತರ ಒಳಿತಿಗೆ ಪ್ರಯತ್ನಿಸಬೇಕು ಎಂದು ವಿಶ್ವ ಸಂಸ್ಥೆ ಆಶಿಸುತ್ತದೆ.
1945 ರ ವಿಶ್ವ ಸಂಸ್ಥೆಯ 'ಸಾಮಾನ್ಯ ಸಭೆ'ಯಲ್ಲಿ, ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ಸದಸ್ಯರಾಗಿದ್ದ, ಹಂಗೇರಿಯಾದ ಮಂತ್ರಿ ' ಡಾ.ಪಾಲ್ ರೊಮೇನಿ, ವಿಶ್ವ ಆಹಾರ ದಿನ ಆಚರಿಸೋಕೆ ಸಲಹೆ ನೀಡಿದ್ರು. ಇವರ ಸಲಹೆಯನ್ನು ಸ್ವೀಕರಿಸಿ ವಿಶ್ವ ಸಂಸ್ಥೆ, ಈ ದಿನವನ್ನು ಅಂಗೀಕರಿಸಿತು. ಇದೀಗ ಸುಮಾರು 150 ರಾಷ್ಟ್ರಗಳಲ್ಲಿ ವಿಶ್ವ ಆಹಾರ ದಿನ ಆಚರಿಸ್ತಾರೆ.
ಜಗತ್ತಿನ ಹಲವು ರಾಷ್ಟ್ರಗಳಲ್ಲಿರುವ ಬಡತನ ಮತ್ತು ಹಸಿವಿನ ಕುರಿತು ಜಗತ್ತಿಗೆ ಅರಿವು ಮೂಡಿಸಲಾಗುತ್ತೆ. ಜಗತ್ತಿನ ಜನರಿಗೆ ಆಹಾರ ಪೂರೈಸೋ ರೈತರ ಸಮಸ್ಯೆಗಳ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಅನೇಕ ಕಾರ್ಯಕ್ರಮಗಳು ಈ ದಿನ ಜರುಗುತ್ವೆ. ಸಣ್ಣ ಪ್ರಮಾಣದ ರೈತರಿಗೆ ಸಹಾಯ ಮಾಡಲು ಮೈಕ್ರೋ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತೆ. ಆಹಾರ ಪೂರೈಕೆ ಮತ್ತು ವಿತರಣೆಯ ಸಮಸ್ಯೆಗಳ ಕುರಿತು, ವಿಶ್ವ ಸಂಸ್ಥೆಯ ಆಶ್ರಯದಲ್ಲಿ, ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ವಿಚಾರಗೋಷ್ಟಿ, ಸಮ್ಮೇಳನಗಳು, ಕಾರ್ಯಾಗಾರಗಳನ್ನು ನಡೆಸಲಾಗುತ್ತೆ.
ಭಾರತದಂತಹ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕತೆಯ ಬೆನ್ನೆಲುಬಾಗಿದೆ ಕೃಷಿ. ಹೀಗಾಗಿ ಆರೋಗ್ಯ ಪೂರ್ಣ ಆಹಾರದ ಪೂರೈಕೆ ಮತ್ತು ಉತ್ಪಾದನೆಯ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತೆ, ಹಾಗೇ.. ಎಲ್ಲ ದೇಶಗಳೂ, ತಮ್ಮ ಕೃಷಿ ಕ್ಷೇತ್ರದ ಅಭಿವೃದ್ಧಿಗೆ, ಹಾಗೂ ರೈತರ ಒಳಿತಿಗೆ ಪ್ರಯತ್ನಿಸಬೇಕು ಎಂದು ವಿಶ್ವ ಸಂಸ್ಥೆ ಆಶಿಸುತ್ತದೆ.